‘ವಿಸ್ಮಯ’ ಚಿತ್ರೀಕರಣ ಸಾಗುತ್ತಿದೆ...
Posted date: 14 Thu, Jul 2016 – 09:28:48 AM

ಅರ್ಜುನ್ ಸರ್ಜಾ ನಾಯಕರಾಗಿರುವ, ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ‘ವಿಸ್ಮಯ ಚಿತ್ರಕ್ಕೆ ಭರದಿಂದ ಚಿತ್ರೀಕರಣ ಸಾಗುತ್ತಿದೆ.
ಬಹುಭಾಷಾ ನಿರ್ದೇಶಕ ಅರುಣ್ ವೈದ್ಯನಾಥನ್ ವಿಸ್ಮಯ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಯಾವುದೇ ಚಿತ್ರ ಮಾಡಿದರೂ ಸಾಮಾಜಿಕ ಕಾಳಜಿ ಹಾಗೂ ಕ್ರಿಯಾಶೀಲ ಕೆಲಸಕ್ಕೆ ಮಹತ್ವ ಕೊಡುವವರು ಅರ್ಜುನ್ ಸರ್ಜಾ. ಅಂಥಾದ್ದೇ ಕ್ರಿಯಾಶೀಲ ಚಿತ್ರಗಳ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಅರುಣ್ ವೈದ್ಯನಾಥನ್ ಹಾಗೂ ಅರ್ಜುನ್ ಸರ್ಜಾ ಕಾಂಬಿನೇಷನ್ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲವಂತೂ ಇದ್ದೇ ಇದೆ.
ಈ ಚಿತ್ರಕ್ಕೆ ಕಥೆ ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಅರುಣ್ ವೈದ್ಯನಾಥನ್ ಅವರೇ ವಹಿಸಿಕೊಂಡಿದ್ದಾರೆ. ಜೊತೆಗೆ ನಿರ್ಮಾಪಕರಲ್ಲಿ ಇವರೂ ಒಬ್ಬರಾಗಿದ್ದಾರೆ. ಸತೀಶ್ ಸಂಕಲನ, ಅನ್ಬು ಅರಿವು ಸಾಹಸ ಈ ಚಿತ್ರಕ್ಕಿದೆ. ಪ್ರದೀಪ್ ಸುಬ್ರಹ್ಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿರುವ ‘ವಿಸ್ಮಯಕ್ಕೆ ಉಮಾಶಂಕರ್, ಸುಗನ್, ಜೈರಾಮ್ ನಿರ್ಮಾಪಕರಾಗಿದ್ದಾರೆ.
ಇಲ್ಲಿ ಅರ್ಜುನ್ ಸರ್ಜಾಗೆ ಲೂಸಿಯಾ ಬೆಡಗಿ ಶ್ರುತಿ ಹರಿಹರನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸುಹಾಸಿನಿ, ಸುಮನ್, ಸುಧಾರಾಣಿ, ವರೂ ಶರತ್ ಕುಮಾರ್ ಮುಂತಾದವರ ತಾರಾಗಣವಿದೆ.
ಈ ಚಿತ್ರದ ಬಗ್ಗೆ ಇದೀಗ ಭಾರೀ ಕುತೂಹಲ ಮತ್ತು ನಿರೀಕ್ಷೆಗಳು ಗರಿಗೆದರಿಕೊಂಡಿರುವುದಕ್ಕೆ ಕಾರಣಗಳಿವೆ. ಈ ಚಿಒತ್ರದ ನಿರ್ದೇಶಕರಾದ ಅರುಣ್ ವೈದ್ಯನಾಥ್ ಬಹು ಭಾಷೆಗಳಲ್ಲಿ ಇದೀಗಲೇ ಹೆಸರು ಮಾಡಿದ್ದಾರೆ. ತಮಿಳಿನ ಅಚ್ಚಮುಂಡು ಅಚ್ಚಮುಂಡು ಮತ್ತು ಮಲೆಯಾಳಂನ ಪೆರುಚಾಲಿಯಂಥಾ ಹಿಟ್ ಸಿನಿಮಾಗಳನ್ನೂ ಕೊಟ್ಟಿದ್ದಾರೆ. ಇಂಥಾ ಪ್ರತಿಭಾವಂತ ನಿರ್ದೇಶಕರ ಜೊತೆ ಅರ್ಜುನ್ ಸರ್ಜಾ ಕಾಂಬಿನೇಷನ್ ಮೋಡಿ ಮಾಡುವ ಲಕ್ಷಣಗಳಿವೆ.
ಅಂಹಾಗೆ ನಿರ್ದೇಶಕ ಅರುಣ್ ವೈದ್ಯನಾಥನ್‌ರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಇದೀಗ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗುತ್ತಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed